Posts

Showing posts with the label Sriramulu

Spoof of BJP government in Karnataka-2

ಬಳ್ಳಾರಿ ಗಣಿಗಾಥಾ: ಶ್ರೀರಾಮುಲು ಸ್ವಪ್ನ ವಿಮಾನಯಾನ By ಹೃಷಿಕೇಶ್ ಬಹದ್ದೂರ್ ದೇಸಾಯಿ ಆ ಫೋನು ನನಗೆ ಅಮರ ಚಿತ್ರಕಥಾದ ಆಕಾಶವಾಣಿಯಂತೆ ಕೇಳಿತು. ಆ ಕಡೆಯಿಂದ ಮಾತಾಡಿದವರು ಶ್ರೀರಾಮುಲು ಅವರ ಪಿಎ. ‘ಅಲ್ರೀ ಬಳ್ಳಾರಿಗೆ ಯಾಕೆ ಹೋದಿರಿ? ಸಾಹೇಬರು ಬೆಂಗಳೂರಿನ ಹತ್ತಿರ ಜಕ್ಕೂರು ಏರೋಡ್ರೋಮ್ ಹತ್ತಿರ ಇದ್ದಾರೆ. ಅಲ್ಲೇ ಹೋಗಿ' ಅಂತ ಅಂದರು. ನಾನು ಜಕ್ಕೂರಿಗೆ ಹೋದೆವು. ಆದರೆ ಅಲ್ಲಿ ಅವರು ಎಲ್ಲೂ ಕಾಣಲಿಲ್ಲ. ಸಾಹೇಬರ ಸಹಾಯಕ ಸಾಹೇಬರಿಗೆ ಫೋನು ಮಾಡಿದರೆ ‘ಜೀವನದಲ್ಲಿ ತಲೆ ಎತ್ತಿ ಬದುಕುವುದು ಕಲೀರಿ ಸಾರ್' ಅಂತ ಫಿಲಾಸಫಿ ಮಾತಾಡಿದರು. ಮೇಲೆ ನೋಡಿದರೆ ಆಕಾಶದಲ್ಲಿ ಒಂದು ಡಿರಿಜಿಬಲ್ ಏರ್ ಷಿಪ್ (dirigible air ship) ಹಾರಾಡುತ್ತಾ ಇದೆ. ‘ಮೇಲೆ ಬನ್ನಿ' ಅಂತ ಸಾಹೇಬರ ಮತ್ತೊಬ್ಬ ಸಹಾಯಕರು ಒಂದು ಹಗ್ಗ ಇಳಿ ಬಿಟ್ಟರು. ಒಬ್ಬೊಬ್ಬರೇ ಮೇಲೆ ಹತ್ತಿ ಹೋದೆವು. ಒಳಗೆ ನಾನು ಕಂಡರಿಯದ ಇನ್ನೊಂದು ಜಗತ್ತೇ ಇದೆ. ಅಲ್ಲಿ ಎಲ್ಲರೀತಿಯ ಯಂತ್ರಗಳಿವೆ. ನೂರಾರು ಸುಪರ್ ಕಂಪ್ಯೂಟರ್ ಗಳು, ಅವನ್ನು ನಿಯಂತ್ರಿಸಲು ಇನ್ನೊಂದು ಸುಪರ್ ಕಂಪ್ಯೂಟರ್, ಧ್ವನಿ ನಿಯಂತ್ರಿತ ರೊಬೊಟ್ ಗಳು, ನೀರು ಬೇಕಿಲ್ಲದ ಟಾಯ್ಲೆಟ್, ಊಟವಾದ ತಕ್ಷಣ ಹಾಸಿಗೆಯಾಗಿಬಿಡುವ ಡೈನಿಂಗ್ ಟೇಬಲ್, ಎಲ್ಲ. ಚಿಯರ್ ಫುಲ್ ಮೋದಿ ಇನ್ನು ಅಲ್ಲಿ ಸಚಿವರ ಆಫೀಸೇ ಅಲ್ಲಿದೆ. ಅಲ್ಲಿಯೇ ಪ್ರಿನ್ಸಿಪಲ್ ಸೆಕ್ರೆಟರಿ, ಅಂಡರ್ ಸೆಕ್ರೆಟರಿ, ಓವರ್ ಸೆಕ್ರೆಟರಿ ಎಲ್ಲರೂ ಇದ್ದಾರೆ. ಹೊಸ ಹಾಲಿವುಡ್...

Spoof on BJP government in Karnataka-1

ಕಮಲದಲ್ಲಿ ಕಮಲ ಹುಟ್ಟಿ, ಗೂಢದಲ್ಲಿ ಲೀನವಾಗಿ By ಹೃಷಿಕೇಶ್ ಬಹದ್ದೂರ್ ದೇಸಾಯಿ ಅಂದು ಮಧ್ಯಾಹ್ನ ನನ್ನ ಫೋನಿಗೆ ವಿದೇಶಿ ನಂಬರಿನಿಂದ ಫೋನ್ ಬಂತು. ಲಂಡನ್ನಿನಲ್ಲಿರುವ ನನ್ನ ಹೆಂಡತಿಯ ತಮ್ಮ ಫೋನ್ ಮಾಡಿರಬೇಕು ಅಂತ ಎತ್ತಿದೆ. ಆದರೆ ಫೋನ್ ಮಾಡಿದವರು ಬೇರೆ. ಸಹಕಾರಿ ಧುರೀಣ ಹಾಗೂ ಹಿರಿಯ ಮಿತ್ರ ಗುರುನಾಥ್ ಈಜಿಪ್ತ್ ನಿಂದ ಮಾತಾಡುತ್ತಿದ್ದರು. ಪಿರಾಮಿಡ್ಡೀಕರಣ ``ಏನ್ ನ್ಯೂಸು ಸರ್ ನಮ್ಮ ಪಾರ್ಟಿ ಏನಂತದ? ಸರಕಾರ ಇರ್ತದೋ ಇಲ್ಲೋ?'' ಎಂದರು. ``ನೀವು ಈಜಿಪ್ತ್ ನಲ್ಲಿ ಇದ್ದೀರೋ ಇಲ್ಲೋ. ಅಲ್ಲಿಯೇ ಯಾವುದಾದರೂ ಪಿರಾಮಿಡ್ ನೋಡಲಿಕ್ಕೆ ಹೋದಾಗ ಯಾವುದಾದರೂ ಪಿರಾಮಿಡ್ ಖಾಲಿ ಇದ್ದರೆ ನಿಮ್ಮ ಪಕ್ಷಕ್ಕೊಂದು ಸಮಾಧಿ ಬುಕ್ ಮಾಡಿಬಂದು ಬಿಡ್ರಿ'' ಅಂತಂದೆ. ``ಹೌದು ಹೋಗಿದ್ವಿ. ಆದರೆ ಪಿರಾಮಿಡ್ ಯಾವುದೂ ಖಾಲಿ ಇದ್ದಂಗ ಕಾಣಲಿಲ್ಲ'' ಅಂದರು. ``ಅಯ್ಯೋ ಹಂಗಾರ ಅಯೋಧ್ಯಾನೋ, ಕಾಶ್ಮೀರಾನೋ ಎಲ್ಲೋ ಒಂದು ಕಡೆ ಸಮಾಧಿ ಹುಡುಕಬೇಕಾತು'' ಅಂತ ನಕ್ಕು ಸುಮ್ಮನಾದೆವು. ಪ್ಲ್ಯಾಂಟರ್ ಗಳ ಸಮಾವೇಶ ಆ ನಂತರ ಸ್ವಲ್ಪ ಹೊತ್ತಿಗೆ ಸ್ನೇಹಿತ ಶ್ರೀರಾಮುಲು ಅವರ ಪಿಎ ಅವರ ಫೋನ್ ಬಂತು. ಸಾಹೇಬರ ಪ್ರೆಸ್ ಮೀಟ್ ಇದೆ ಸಾರ್, ಬರಬೇಕಂತೆ ಅಂದರು. ನಾನು ಹೋದರೆ ಅಲ್ಲಿ ಪತ್ರಿಕಾಗೋಷ್ಠಿ ಇಲ್ಲ. ಏನಿಲ್ಲ. ಪ್ರೆಸ್ ಮೀಟ್ ಅಂದರೆ ಸುದ್ದಿಗೋಷ್ಠಿ ಅಲ್ಲ. ಸರ್, ಪ್ರೆಸ್ ನವರನ್ನು ಮೀಟ್ ಮಾಡೋದು, ಅಷ್ಟೇ, ಅಂದರು ಸಚಿವರು. ಅವರನ್ನು ಆವಾಗಾವಾಗ ಮೀ...

Recent article in Kendasampige

ಎಮ್ಮ ಚೆಲುವ ಕರುನಾಡು:ಒಂಥರಾ ಮಂಥನ ಶಿಬಿರವು ಹೃಷಿಕೇಶ್ ಬಹದ್ದೂರ್ ದೇಸಾಯಿ ಸೋಮವಾರ, 15 ನವೆಂಬರ್ 2010 (05:18 IST) (ಚಿತ್ರಗಳು:ಪ್ರಕಾಶ್ ಬಾಬು) ಅವತ್ತು ನಮ್ಮೂರು ಹಾನಗಲ್ಲಿನಲ್ಲಿ `ಕರ್ನಾಟಕ ಕುಲಪುತ್ರ ಗೂಳಿಹಟ್ಟಿ ಶೇಖರ್ ಫ್ಯಾನ್ ಕ್ಲಬ್' ಉದ್ಘಾಟನೆ. ನಾನು ಹಾಗು ನಮ್ಮ ಗೆಳೆಯರು ತುಂಬ ಗಡಿಬಿಡಿಯಲ್ಲಿ ಓಡಾಡಿಕೊಂಡು ಇದ್ದೆವು. ಕಾರ್ಯಕ್ರಮವನ್ನು ತುಂಬ ಡಿಫೆರೆಂಟ್ ಆಗಿ ಮಾಡಬೇಕು ಎಂದುಕೊಂಡಿದ್ದರಿಂದ ನಮಗೆ ತುಂಬ ಕೆಲಸಗಳು. `ಬರೀ ಭಾಷಣ ಬೇಡ, ಏನಾದರೂ ಪ್ರ್ಯಾಕ್ಟಿಕಲ್ ತರಬೇತಿ ಇಟ್ಟುಕೊಳ್ಳಿ' ಅಂತ ಜಗದ್ಗುರು ರೇಣುಕಾಚಾರ್ಯ ಅವರು ಅಪ್ಪಣೆ ಕೊಡಿಸಿದ್ದರಿಂದ ತಿಂಗಳುಗಟ್ಟಲೇ ಕಷ್ಟಪಟ್ಟು ಒಂದು ಶಿಬಿರವನ್ನೇ ಆಯೋಜಿಸಿದೆವು. ಅದಕ್ಕ ವಿವರವಾದ ವೇಳಾಪಟ್ಟಿ ತಯಾರು ಮಾಡಿದ್ದೆವು. ಶಿಬಿರ ತುಂಬ ಚೆನ್ನಾಗಿ ನಡೆಯಿತು. ಅದೊಂದು ಹೊಸ ರೀತಿಯ ಪ್ರಯೋಗ, ತುಂಬ ಇಂಟರೆಸ್ಟಿಂಗ್ ಅಂತ ಅನ್ನಿಸಿತು. ಓದುಗರಿಗೂ ಕುತೂಹಲ ಇರಬಹುದು ಅಂತ ಅನ್ನಿಸಿ ಇಲ್ಲಿ ಪ್ರಕಟಿಸುತ್ತಿದ್ದೇವೆ. ಬೆಳಿಗ್ಗೆ ಐದು ಗಂಟೆಗೆ ಊರ ಹೊರಗಿನ ರಿಸಾರ್ಟಿನಲ್ಲಿ ವಾಕಿಂಗ್ ಹಾಗೂ ವ್ಯಾಯಾಮ. ದಿನಾಲೂ ವಾಕಿಂಗ್ ಮಾಡದೇ ಇದ್ದರೂ ಟೀವಿ ಕ್ಯಾಮೆರಾದ ಮುಂದೆ ತೋರಿಸಿಕೊಳ್ಳುವುದು ಹೇಗೆ ಎನ್ನುವುದರ ಬಗ್ಗೆ ನಿಕಟಪೂರ್ವ ಶಾಸಕರೊಬ್ಬರಿಂದ ಟ್ರೇನಿಂಗ್. ಆಮೇಲೆ ತೂಕ ಇಳಿಸಿಕೊಳ್ಳುವುದರ ಬಗ್ಗೆ ಧರಂಸಿಂಗ್ ಹಾಗೂ ನಿತಿನ್ ಗಡ್ಕರಿ ಅವರಿಂದ ಚಿಂತನ. (ಇನ್ನೇನು ಅವರು ಕಸರತ್ತು ಮಾಡಿ ತ...

ನಾನು, ಬಳ್ಳಾರಿ ಹಾಗು ನ್ಯೂಯಾರ್ಕ್ ಟೈಮ್ಸ್

-ನಾನು ಕೆಂಡಸಂಪಿಗೆ.ಕಾಂ ನಲ್ಲಿ ಬರೆದ ಲಲಿತ ಪ್ರಬಂಧ ಬಳ್ಳಾರಿ ಗಣಿದಣಿಗಳ ಕುರಿತು ನ್ಯೂಯಾರ್ಕ್ ಟೈಮ್ಸ್ ನ ಜಿಮ್ ಯಾರ್ಡ್ಲಿ ಬರೆದದ್ದು ಲೋಕ ವಿಖ್ಯಾತವಾಗಿದೆ.ಆದರೆ ಅವರ ಜೊತೆಜೊತೆಗೇ ಇದ್ದ ನಮ್ಮ ಹೃಷಿಕೇಶ್ ದೇಸಾಯರು ಪಟ್ಟ ಪಡಿಪಾಟಲು ಇಲ್ಲಿದೆ. ಅಂದು ರಾತ್ರಿಪಾಳಿ ಮುಗಿಸಿ ಮಲಗಿದ್ದೆ. ಯಾರೋ ನನ್ನನ್ನು ಹಕ್ಕೊಂಡು ಹೊಡೆದಿದ್ದಾರೋ ಎನ್ನುವಂತೆ ನಿದ್ದೆ ಬಂತು. ನನ್ನ ಬಾಸ್ ಫೋನ್ ಬಂತು. ಧಡಕ್ಕನೇ ಎದ್ದೆ. ಆಗ ಚುಮುಚುಮು ೫ ಗಂಟೆ. ಇಷ್ಟೊತ್ತಿಗೆ ಫೋನ್ ಮಾಡ್ತಾರಲ್ಲೋ ‘......’, ಅಂದುಕೊಂಡೆ. ‘ನಾನೂ ಹತ್ತು ವರ್ಷದಿಂದ ನೋಡ್ತೇನಿ. ನಾನು ಕರೆದಾಗ ಒಂದು ದಿನ ಆದರೂ ಹಿಂಗ ಗಡಿಬಿಡಿ ಮಾಡೀರ‍್ಯಾ. ಆ ಸುಡುಗಾಡು ಕೆಲಸ, ಈ ಸುಡುಗಾಡು ಗಡಿಬಿಡಿ. ಹೊಗೊ ನಿಮ್ಮ ಮಂಜಾಳಾಗ', ಅಂತ ನನ್ನ ಹೆಂಡತಿ ಬೈದು ಮತ್ತೆ ಮಲಗಿದಳು. ರೂಢಿಯಂತೆ ಅದರಲ್ಲಿ ಸ್ಪೆಲಿಂಗ್ ಮಿಸ್ಟೇಕ್ ಕಂಡು ಹಿಡಿದರೆ ಹೊಡೆತ ತಿನ್ನುತೇನೆ ಎಂದು ಗೊತ್ತಾಗಿ ಸುಮ್ಮನಿದ್ದೆ. ಮನೆಯಲ್ಲಿ ಬಿಎಸ್ಸೆನ್ನೆಲ್ ಸಿಗ್ನಲ್ ಬರೋದಿಲ್ಲವಾದ್ದರಿಂದ ರಸ್ತೆಗೆ ಬಂದೆ. ಹಲೋ ಎಂದೆ. ಅತ್ತಲಿನವರಿಗೆ ಕೇಳಲಿಲ್ಲ ಎಂದು ಖಾತ್ರಿಯಾದ ಮೇಲೆ ಜೋರಾಗಿ ಹಲೋ ಎಂದೆ. ‘ದೇಸಾರ, ಬೆಳ ಬೆಳಿಗ್ಗೆ ಬ್ರೇಕಿಂಗ್ ನ್ಯೂಸು ಏನರೆಪಾ? ಗೌರಮೆಂಟು ಬಿತ್ತೋ? ಕ್ರೈಮ್ ಸುದ್ದಿಯೋ, ಪ್ಲೇನ್ ಕ್ರ್ಯಾಷೋ, ಪಬ್ ಅಟ್ಯಾಕೋ, ಮಿನಿಸ್ಟರ್ ಸ್ಕ್ಯಾಂಡಲ್ಲೋ, ಏನಾತು', ಅಂತ ಬಂದರು ಪಕ್ಕದ ಮನೆಯ ಕಾಳೆ. ಅವರು ರಾಜ್ಯ ಹಿರಿಯ ನಾಗರಿಕರ ಸ...

Gadag Sahitya Sammelana

I wrote an article for the Kannada lit website wwww.Kendasampige.com http://www.kendasampige.com/article.php?id=3094 -ಗದಗ್ ಸಾಹಿತ್ಯ ಸಮ್ಮೇಳನ ಗಂಡಸರ ಮೂತ್ರವೇನು ಗೊಮೂತ್ರವೇ? ಗದಗಿನಲ್ಲಿ ನಡೆದ ೭೬ನೇ ಸಾಹಿತ್ಯ ಸಮ್ಮೇಳನದ ಬಗೆಗಿನ ಯಾವುದೇ ಲೇಖನಕ್ಕೆ ಕೊಡಬಹುದಾದ ಅತಿ ಉತ್ತಮ ಟೈಟಲ್ ಅಂದರೆ ಇದು. ಈ ಮಾತನ್ನು ಹೇಳಿದವರು ಗುಲ್ಬರ್ಗಾದ ಸಾಹಿತಿ ಹಾಗು ಮಹಿಳಾ ಹೋರಾಟಗಾರ್ತಿ ಮಲ್ಲಿಕಾ ಘಂಟಿ ಅವರು. ಗಂಡಸರು ಗೋವುಗಳಂತೆ ಸಾಧೂ ಪ್ರಾಣಿಗಳೆಂದೂ, ಅವರಿಗೆ ಸಂಬಂಧ ಪಟ್ಟ ಎಲ್ಲ ವಸ್ತುಗಳೂ ಪವಿತ್ರವೆಂದೂ ಇದರ ಅರ್ಥ ಖಂಡಿತ ಅಲ್ಲ. ಮಹಿಳೆ ಮತ್ತು ಬದುಕು ಎಂಬ ಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಂಗಸರು ಹಾಗೂ ಗಂಡಸರು ಬಳಸುವ ಶೌಚಾಲಯ ಗಳಲ್ಲಿ ನಡೆಯುವ ತಾರತಮ್ಯದ ಬಗ್ಗೆ ತಿಳಿಸುವಾಗ ಈ ಕಣ್ಣಿಗೆ ಕಟ್ಟುವಂಥಹ ಉದಾಹರಣೆ ನೀಡಿದರು. '' ಗಂಡಸರ ಶೌಚಾಲಯಗಳಲ್ಲಿ ಮೂತ್ರಕ್ಕೆ ಶುಲ್ಕ ಇಲ್ಲ. ಸಂಡಾಸಕ್ಕೆ ಮಾತ್ರ ಇದೆ. ಆದರೆ ಹೆಂಗಸರ ಶೌಚಾಲಯಗಳಲ್ಲಿ ಮೂತ್ರಕ್ಕೂ ದುಡ್ಡು ಕೊಡಬೇಕು. ಬಡ ಹಳ್ಳಿಯ ಹೆಣ್ಣು ಮಕ್ಕಳ ಹತ್ತಿರ ಊಟಕ್ಕೇ ಕಾಸಿರುವುದಿಲ್ಲ. ಅಂಥದ್ದರಲ್ಲಿ ಮೂತ್ರಕ್ಕೆ ಹಣ ಕೊಡಿ ಎಂದರೆ ಹೆಂಗೆ ? ಅಷ್ಟಕ್ಕೂ ಈ ಬೇಧಭಾವ ಏಕೆ? ಗಂಡಸರ ಮೂತ್ರವೇನು ಗೊಮೂತ್ರವೇ?'' ಎಂದು ಅವರು ಕೇಳಿದ್ದು. ನಲ್ಲಿ ನೀರು ಇನ್ನು ಸಮ್ಮೇಳನ ಅಧ್ಯಕ್ಷರೊಡನೆ ಸಂವಾದದಲ್ಲಿ ನೆನಪಿನಲ್ಲಿ ಉಳಿವಂಥಹ ಮಾತು ಗಳನ್ನು ಆಡಿದವರು ಸಾಹಿತಿ ಮೀ...