Posts

Showing posts from February, 2011

Literary Monuments of a Glorious Past

Did you know that the first ever Urdu book in the world was published in Bidar? Did you know that a poem sung in praise of Prophet Mohammad in the Masjid –E- Nabavi in Madina was written by a poet who lived in Bidar in the 18th century? Has any one told you that Chalukya King Someshwara the Third of Kalyana produced a Sanskrit encyclopedia a thousand years before anyone attempted writing encyclopedias in the modern world? The literary heritage of Bidar is as rich as its cultural history. Sadly, the poetry emanating from the red soil here has not received as much acclaim as the archeological monuments here. Now for the answers. Fakhruddin Nizami's `Masnavi Kadam Rao Padam Rao' was written and published between 1325–1338 A D. That is considered the first Urdu book ever published. Hazrath Ishqui who died in Hyderabad in 1805 wrote the Naat Ya Shafi Ul Wara that is sung by believers in Madina and around the world. Someshwara’s `Manasollasa’ is considered the first ever encyclopedia

Spoof of BJP government in Karnataka-2

ಬಳ್ಳಾರಿ ಗಣಿಗಾಥಾ: ಶ್ರೀರಾಮುಲು ಸ್ವಪ್ನ ವಿಮಾನಯಾನ By ಹೃಷಿಕೇಶ್ ಬಹದ್ದೂರ್ ದೇಸಾಯಿ ಆ ಫೋನು ನನಗೆ ಅಮರ ಚಿತ್ರಕಥಾದ ಆಕಾಶವಾಣಿಯಂತೆ ಕೇಳಿತು. ಆ ಕಡೆಯಿಂದ ಮಾತಾಡಿದವರು ಶ್ರೀರಾಮುಲು ಅವರ ಪಿಎ. ‘ಅಲ್ರೀ ಬಳ್ಳಾರಿಗೆ ಯಾಕೆ ಹೋದಿರಿ? ಸಾಹೇಬರು ಬೆಂಗಳೂರಿನ ಹತ್ತಿರ ಜಕ್ಕೂರು ಏರೋಡ್ರೋಮ್ ಹತ್ತಿರ ಇದ್ದಾರೆ. ಅಲ್ಲೇ ಹೋಗಿ' ಅಂತ ಅಂದರು. ನಾನು ಜಕ್ಕೂರಿಗೆ ಹೋದೆವು. ಆದರೆ ಅಲ್ಲಿ ಅವರು ಎಲ್ಲೂ ಕಾಣಲಿಲ್ಲ. ಸಾಹೇಬರ ಸಹಾಯಕ ಸಾಹೇಬರಿಗೆ ಫೋನು ಮಾಡಿದರೆ ‘ಜೀವನದಲ್ಲಿ ತಲೆ ಎತ್ತಿ ಬದುಕುವುದು ಕಲೀರಿ ಸಾರ್' ಅಂತ ಫಿಲಾಸಫಿ ಮಾತಾಡಿದರು. ಮೇಲೆ ನೋಡಿದರೆ ಆಕಾಶದಲ್ಲಿ ಒಂದು ಡಿರಿಜಿಬಲ್ ಏರ್ ಷಿಪ್ (dirigible air ship) ಹಾರಾಡುತ್ತಾ ಇದೆ. ‘ಮೇಲೆ ಬನ್ನಿ' ಅಂತ ಸಾಹೇಬರ ಮತ್ತೊಬ್ಬ ಸಹಾಯಕರು ಒಂದು ಹಗ್ಗ ಇಳಿ ಬಿಟ್ಟರು. ಒಬ್ಬೊಬ್ಬರೇ ಮೇಲೆ ಹತ್ತಿ ಹೋದೆವು. ಒಳಗೆ ನಾನು ಕಂಡರಿಯದ ಇನ್ನೊಂದು ಜಗತ್ತೇ ಇದೆ. ಅಲ್ಲಿ ಎಲ್ಲರೀತಿಯ ಯಂತ್ರಗಳಿವೆ. ನೂರಾರು ಸುಪರ್ ಕಂಪ್ಯೂಟರ್ ಗಳು, ಅವನ್ನು ನಿಯಂತ್ರಿಸಲು ಇನ್ನೊಂದು ಸುಪರ್ ಕಂಪ್ಯೂಟರ್, ಧ್ವನಿ ನಿಯಂತ್ರಿತ ರೊಬೊಟ್ ಗಳು, ನೀರು ಬೇಕಿಲ್ಲದ ಟಾಯ್ಲೆಟ್, ಊಟವಾದ ತಕ್ಷಣ ಹಾಸಿಗೆಯಾಗಿಬಿಡುವ ಡೈನಿಂಗ್ ಟೇಬಲ್, ಎಲ್ಲ. ಚಿಯರ್ ಫುಲ್ ಮೋದಿ ಇನ್ನು ಅಲ್ಲಿ ಸಚಿವರ ಆಫೀಸೇ ಅಲ್ಲಿದೆ. ಅಲ್ಲಿಯೇ ಪ್ರಿನ್ಸಿಪಲ್ ಸೆಕ್ರೆಟರಿ, ಅಂಡರ್ ಸೆಕ್ರೆಟರಿ, ಓವರ್ ಸೆಕ್ರೆಟರಿ ಎಲ್ಲರೂ ಇದ್ದಾರೆ. ಹೊಸ ಹಾಲಿವುಡ್

Spoof on BJP government in Karnataka-1

ಕಮಲದಲ್ಲಿ ಕಮಲ ಹುಟ್ಟಿ, ಗೂಢದಲ್ಲಿ ಲೀನವಾಗಿ By ಹೃಷಿಕೇಶ್ ಬಹದ್ದೂರ್ ದೇಸಾಯಿ ಅಂದು ಮಧ್ಯಾಹ್ನ ನನ್ನ ಫೋನಿಗೆ ವಿದೇಶಿ ನಂಬರಿನಿಂದ ಫೋನ್ ಬಂತು. ಲಂಡನ್ನಿನಲ್ಲಿರುವ ನನ್ನ ಹೆಂಡತಿಯ ತಮ್ಮ ಫೋನ್ ಮಾಡಿರಬೇಕು ಅಂತ ಎತ್ತಿದೆ. ಆದರೆ ಫೋನ್ ಮಾಡಿದವರು ಬೇರೆ. ಸಹಕಾರಿ ಧುರೀಣ ಹಾಗೂ ಹಿರಿಯ ಮಿತ್ರ ಗುರುನಾಥ್ ಈಜಿಪ್ತ್ ನಿಂದ ಮಾತಾಡುತ್ತಿದ್ದರು. ಪಿರಾಮಿಡ್ಡೀಕರಣ ``ಏನ್ ನ್ಯೂಸು ಸರ್ ನಮ್ಮ ಪಾರ್ಟಿ ಏನಂತದ? ಸರಕಾರ ಇರ್ತದೋ ಇಲ್ಲೋ?'' ಎಂದರು. ``ನೀವು ಈಜಿಪ್ತ್ ನಲ್ಲಿ ಇದ್ದೀರೋ ಇಲ್ಲೋ. ಅಲ್ಲಿಯೇ ಯಾವುದಾದರೂ ಪಿರಾಮಿಡ್ ನೋಡಲಿಕ್ಕೆ ಹೋದಾಗ ಯಾವುದಾದರೂ ಪಿರಾಮಿಡ್ ಖಾಲಿ ಇದ್ದರೆ ನಿಮ್ಮ ಪಕ್ಷಕ್ಕೊಂದು ಸಮಾಧಿ ಬುಕ್ ಮಾಡಿಬಂದು ಬಿಡ್ರಿ'' ಅಂತಂದೆ. ``ಹೌದು ಹೋಗಿದ್ವಿ. ಆದರೆ ಪಿರಾಮಿಡ್ ಯಾವುದೂ ಖಾಲಿ ಇದ್ದಂಗ ಕಾಣಲಿಲ್ಲ'' ಅಂದರು. ``ಅಯ್ಯೋ ಹಂಗಾರ ಅಯೋಧ್ಯಾನೋ, ಕಾಶ್ಮೀರಾನೋ ಎಲ್ಲೋ ಒಂದು ಕಡೆ ಸಮಾಧಿ ಹುಡುಕಬೇಕಾತು'' ಅಂತ ನಕ್ಕು ಸುಮ್ಮನಾದೆವು. ಪ್ಲ್ಯಾಂಟರ್ ಗಳ ಸಮಾವೇಶ ಆ ನಂತರ ಸ್ವಲ್ಪ ಹೊತ್ತಿಗೆ ಸ್ನೇಹಿತ ಶ್ರೀರಾಮುಲು ಅವರ ಪಿಎ ಅವರ ಫೋನ್ ಬಂತು. ಸಾಹೇಬರ ಪ್ರೆಸ್ ಮೀಟ್ ಇದೆ ಸಾರ್, ಬರಬೇಕಂತೆ ಅಂದರು. ನಾನು ಹೋದರೆ ಅಲ್ಲಿ ಪತ್ರಿಕಾಗೋಷ್ಠಿ ಇಲ್ಲ. ಏನಿಲ್ಲ. ಪ್ರೆಸ್ ಮೀಟ್ ಅಂದರೆ ಸುದ್ದಿಗೋಷ್ಠಿ ಅಲ್ಲ. ಸರ್, ಪ್ರೆಸ್ ನವರನ್ನು ಮೀಟ್ ಮಾಡೋದು, ಅಷ್ಟೇ, ಅಂದರು ಸಚಿವರು. ಅವರನ್ನು ಆವಾಗಾವಾಗ ಮೀ

In defence of plain language

`!?#$%^&*@@??!': ಗೆಳೆಯರೇ ಇದೇನೆಂದು ದಯವಿಟ್ಟು ಗಳಹುವಿರಾ! By ಹೃಷಿಕೇಶ್ ಬಹದ್ದೂರ್ ದೇಸಾಯಿ ನಿಮ್ಮ ದೂರದ ಸಂಬಂಧಿಕರಾದ (ಹಾಗೆಂದು ಅವರೇ ಹೇಳಿಕೊಂಡ) ಎಲ್ಲೈಸಿ ಏಜೆಂಟರು ನಿಮ್ಮ ಮನೆಗೆ ಬಂದು ನಿಮ್ಮ ಚಹಾ ಕುಡಿದು, ನಿಮ್ಮದೇ ಹಣ ಪಡೆದು, ಬಿಳೀ ಹಾಳೆಯ ಮೇಲೆ ನಿಮ್ಮ ಸಹಿ ಮಾಡಿಸಿಕೊಂಡಿದ್ದು ಎಷ್ಟು ಸಾರಿ? ಅದೆಷ್ಟು ಸಾರಿ ಅವರು ಹೇಳಿದ ವಿಷಯಗಳು ನಿಮಗೆ ಅರ್ಥವಾಗಿವೆ? ಅದೆಷ್ಟು ಸಾರಿ ಅವರು ನೀಡಿದ ಹಾಳೆಗಳ ಮೇಲೆ ಪ್ರಿಂಟಾದ ವಿಷಯಗಳನ್ನು ನೀವು ಓದಿದ್ದೀರಿ? ಓದಿದ ಎಷ್ಟು ವಿಷಯ ನಿಮಗೆ ಎಷ್ಟು ಸಾರಿ ಅರ್ಥವಾಗಿದೆ? ಅದು ನಿಮ್ಮ ತಪ್ಪಲ್ಲ. ಆ ಪಾಲಿಸಿಗಳನ್ನು ಬರೆದವರ ತಪ್ಪು. ಇದು ಯಾಕೆ? ಯಾಕೆಂದರೆ, ಜಗತ್ತಿನ ಎಲ್ಲ ಮಾರಕ ರೋಗಗಳಿಗಿಂತಲೂ ಭಯಂಕರ ರೋಗ ಈಗ ನಮಗೆಲ್ಲ ಅಂಟಿಕೊಂಡಿದೆ. ಅದರ ಲಕ್ಷಣಗಳೇನೆಂದರೆ 1. ತನಗೆ ಒಂದು ಚೂರೂ ಅರ್ಥವಾಗದ ವಿಷಯದ ಬಗ್ಗೆ ಎಲ್ಲಾ ಗೊತ್ತಿದ್ದವರಂತೆ ಜೋರು ದನಿಯಲ್ಲಿ ಮಾತಾಡುವುದು ಹಾಗೂ 2. ತಾವು ಹೇಳುವ ವಿಷಯಗಳು ಇತರರಿಗೆ ತಿಳಿಯುತ್ತಿದ್ದಾವೋ ಇಲ್ಲವೋ ಎಂಬುದನ್ನು ಗಮನಿಸದೇ ಮಾತಾಡುತ್ತಾ ಹೋಗುವುದು. ಈ ವ್ಯಾಧಿಯನ್ನು ನೀವು ಸುದ್ದಿ ಮಾಧ್ಯಮಗಳಿಂದ ಹಿಡಿದು, ಜಾಹೀರಾತುಗಳು, ಸರಕಾರದ ನೀತಿಗಳು, ಈಗ ತಾನೆ ಯುರೋಪ್ ಯಾತ್ರೆ ಮುಗಿಸಿಕೊಂಡು ಬಂದ ವಿದೇಶಾಂಗ ವ್ಯವಹಾರ ಮಂತ್ರಿಗಳ ಹೇಳಿಕೆಗಳು, ಸುಪ್ರೀಂ ಕೋರ್ಟ್ ತೀರ್ಪುಗಳು, ಯುನಿವರ್ಸಿಟಿಯ ಬುದ್ಧಿಜೀವಿಗಳ ಮಾತಿನಲ್ಲಿ, ಸಮಾಜದ ಅಭಿಪ್ರಾಯ ರೂಪಿಸುವ ಜವಾಬ

Democracy for Dummies-1

ಬಡಪಾಯಿಗಳಿಗೆ ಕೆಲವು ಡೆಮಾಕ್ರಸಿ ಪಾಠಗಳು By ಹೃಷಿಕೇಶ್ ಬಹದ್ದೂರ್ ದೇಸಾಯಿ ಕರುನಾಡಲ್ಲಿ ಉಂಟಾಗುತ್ತಿರುವ ತಳಮಳಗಳ ಅರಿವಾಗದೆ ಪಿಳಿಪಿಳಿ ಕಣ್ಣು ಬಿಡುತ್ತಿರುವ ಬಡಪಾಯಿಗಳಿಗಾಗಿ ಹೃಷಿಕೇಶ್ ಬಹದ್ದೂರ್ ದೇಸಾಯಿ ಹೇಳಿಕೊಡುವ ಕೆಲವು ಪ್ರಾಥಮಿಕ ಪಾಠಗಳು ಇಲ್ಲಿವೆ ಸೋಮವಾರ ಬೆಳಿಗ್ಗೆಯಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ಖಟಾಖಟಿಯನ್ನು ಟಿವಿಯಲ್ಲಿ ನೋಡಿದವರಿಗೆ ಗೊಂದಲ ಆಗಿರಬಹುದು, ಏನೂ ತಿಳಿಯದೇ ಇರದಿರಬಹುದು ಅಥವಾ ಪೂರ್ವಯೋರೋಪಿನ ದೇಶದ ಕಾಮೆಡಿ ಚಿತ್ರ ನೋಡಿದ ಅನುಭವ ಆಗಿರಬಹುದು. ಅಂಥವರು ಟಿವಿ ಚಾನೆಲ್ ಅನ್ನು ಮ್ಯೂಟ್ ಆಗಿಟ್ಟಿರಬಹುದು. ಹಾಗೆಂದು ಅವರಿಗೇನೂ ಮನರಂಜನೆ ಕಮ್ಮಿ ಆಗಿರಲಿಕ್ಕಿಲ್ಲ. ಹಾಗಾದರೆ ನಿಜವಾಗಿಯೂ ನಡೆದದ್ದೇನು? ಎನ್ನುವ ವಿಷಯದ ಬಗ್ಗೆ ಬರೆಯೋಣ ಎನ್ನಿಸಿತು. ಹೇಗೂ ಇದು ಕಂಪ್ಯೂಟರ್ಸ್ ಫಾರ್ ಡಮ್ಮೀಸ್ ಸರಣಿಯಲ್ಲಿ ಡೆಮಾಕ್ರೆಸಿ ಫಾರ್ ದ ಇನ್ ಡಿಫರೆಂಟ್ ಎಂದು ಪುಸ್ತಕರೂಪದಲ್ಲಿ ಹೊರಬರಲಿದೆ. ಕೆಂಡಸಂಪಿಗೆ ಓದುಗರಿಗಾಗಿ ಇದೊಂದು ಪೈರೆಟೆಡ್ ಕಾಪಿ. ೧. ಐದೈದು ವರ್ಷಕ್ಕೆ ಬರಬೇಕಾದ ಆದರೆ ಹಗಲೆಲ್ಲ ಬರುವ ಕಾಮೆಡಿ ಬೀದಿ ನಾಟಕಗಳಿಗೆ ಚುನಾವಣೆಗಳು ಎಂದು ಹೆಸರು. ೨. ಇಂಥಾ ಚುನಾವಣೆಗಳಲ್ಲಿ ನಾವು ನಮ್ಮ ಪರವಾಗಿ ಶಾಸನ ಮಾಡುವ ಹಾಗೂ ವಿವಿಧ ಇಲಾಖೆಗಳು ವೆಚ್ಚ ಮಾಡುವ ಹಣದ ಲೆಕ್ಕ ತಪಾಸು ಮಾಡಲು ಕಳಿಸುವ ಜನರಿಗೆ ಶಾಸಕ ಅಥವಾ ಎಮ್ಮೆಲ್ಲೆ ಎಂದು ಹೆಸರು. ೩. ತಾಯಿ ಭುವನೇಶ್ವರಿಯ ಕೃಪೆಯಿಂದ ಆರಿಸಿ ಬಂದ ಇಂಥ ಪುಣ್ಯಾತ್ಮರು ರಾಜ್ಯದ

Democracy for Dummies-2

ಬಡಪಾಯಿಗಳಿಗೆ ಡೆಮೋಕ್ರಸಿ: ಹೃಷಿಕೇಶ್ ಪಂಚಾಯಿತಿ ಪಾಠ ಬಡಪಾಯಿಗಳಿಗೆ ಡೆಮೋಕ್ರಸಿ: ಹೃಷಿಕೇಶ್ ಪಂಚಾಯಿತಿ ಪಾಠ By ಹೃಷಿಕೇಶ್ ಬಹದ್ದೂರ್ ದೇಸಾಯಿ ರಾಜ್ಯದ ೩೦ ಪಂಚಾಯಿತಿಗಳಲ್ಲಿ ಬಿಜೆಪಿ ೧೨ ಸ್ಥಾನ ಗೆದ್ದಿತು, ಕಾಂಗ್ರೆಸ್, ಜೆಡಿಎಸ್ ನಾಲ್ಕು ನಾಲ್ಕು ಗೆದ್ದವು, ಇನ್ನುಳಿದ ೧0 ಅತಂತ್ರ ಅಂತ ಕೆಲವರು ಮೊನ್ನೆ ಸುದ್ದಿ ಬರೆದಿದ್ದಾರೆ. ನಿನ್ನೆಯಿಂದ ಅನೇಕರು ಓದುತ್ತಲೇ ಇದ್ದಾರೆ. ಎಲ್ಲಾ ಕಡೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಬಂದು ಪಂಚಾಯಿತಿ ಸಭೆಗಳು ಆರಂಭವಾಗುವವರೆಗೆ ಇಂಥ ಸುದ್ದಿ ಓದಲೇಬೇಕಾದ ಅನಿವಾರ್ಯತೆ ಮತದಾರರೆಂಬ ನಿತ್ಯ ನಾರಕಿಗಳಿಗೆ ಇದೆ. ಹಂಗೆಲ್ಲಾ ಅಂದರೇನು? ಇದರ ಅರ್ಥ ಏನು? ಈ ಜನವರಿ ೪ ನಾಲ್ಕರ ಚುನಾವಣೆ ಫಲಿತಾಂಶದ ಹಕೀಕತ್ತಾದರೂ ಏನು? ಇದು ಬೇಕಿತ್ತೇ? ನಿಮ್ಮೊಡನಿದ್ದೂ ನಿಮ್ಮಂತಿರದ ಬಾಳು “ಇದರ ಸೀದಾ ಸಾದಾ ಅರ್ಥ ಏನೆಂದರೆ, ರಾಜ್ಯದ ಜಿಲ್ಲಾ ಪಂಚಾಯಿತಿಗಳ ಪೈಕಿ ೪೦ ಶೇಕಡಾ ಸಂಸ್ಥೆಗಳಲ್ಲಿ ಬಹುಮತ ಪಡೆದ ಬಿಜೆಪಿ ಹಾಗೂ ಅದರ ಕಮಾಂಡರ್ ಆದ ಯಡಿಯೂರಪ್ಪ ಅವರು ಗೆದ್ದಂತೆ” ಅಂತ ಮುಖ್ಯಮಂತ್ರಿಗಳ ರೇಸ್ ಕೋಸ್ ನಿವಾಸದ ಸುತ್ತಮುತ್ತ ತಿರುಗಾಡುತ್ತಿರುವ ಅವರ ಹಿಂಬಾಲಕರು ಹೇಳುತ್ತಿದ್ದಾರಂತೆ. ಹೇಳಿಕೊಂಡು ಮತ್ತೆ ತಿರುಗಾಡುತ್ತಿದ್ದಾರಂತೆ. ಅಡ್ಡ ವೈಸರ್ ಗಳು ಇನ್ನು ಕೆಲವರು “ಇದಕ್ಕೆ ಸಾಧನೆ ಅಂತಾರೆಯೇ? ಇದು ಕಂಪ್ಲೀಟ್ ಫೇಲ್ಯುರ್. ನಾನು ಮುಖ್ಯಮಂತ್ರಿಯಾಗಿದ್ದರೆ ತೋರಿಸುತ್ತಿದ್ದೆ. ನೂರಕ್ಕೆ ನೂರು ಕಡೆ ನಮ್ಮವರು ಬಂದು ವಿರೋಧ ಪ

How to outsource the Kannada Sahitya Sammelana

ಕನ್ನಡ ಸಮ್ಮೇಳನ ಹೊರಗುತ್ತಿಗೆ:ಒಂದು ನಿದ್ದೆಗಣ್ಣು ವರದಿ ಗಣ್ಣು ವರದಿ ಹೃಷಿಕೇಶ್ ಬಹದ್ದೂರ್ ದೇಸಾಯಿ ಶುಕ್ರವಾರ, 4 ಫೆಬ್ರವರಿ 2011 (05:34 IST) ಚಿತ್ರ: ಪ್ರಕಾಶ್ ಬಾಬು ರೀ ಸಿಎಂ ಸಾಹೇಬರ ಪಿಎ ಮೀಟಿಂಗ್ ಇದೆ ಅಂತ ಹೇಳಿದ್ದಾರೆ ಏಳ್ರೀ. ಹೋಗ್ರೀ, ಅಂತ ಸಂಪಾದಕರು ರಾತ್ರಿ ಎರಡು ಗಂಟೆಗೆ ಫೋನ್ ಮಾಡಿದರು. ಇಷ್ಟೊತ್ತಿಗೆ ಎಂಥಾ ಮೀಟೀಂಗು ಸಾರ್ ಎಂದೆ. ನನಗೊತ್ತಿದ್ದರೆ ನಾನ್ಯಾಕ್ರೀ ನಿಮಗೆ ಹೇಳ್ತಿದ್ದೆ? ಸುಮ್ಮನೇ ಹೋಗ್ರೀ ಅಂತ ಚೀರಿದರು. ಇವರ‍್ಯಾಕೆ ಚೀರ‍್ತಾರೆ ಅನ್ನಿಸಿತಾದರೂ, ಸಂಪಾದಕರಾದ ಮೇಲೆ ಇಷ್ಟಾದರೂ ಚೀರದಿದ್ದರೆ ಹೇಗೆ ಅಂತ ಅರ್ಥವಾಯಿತು. ಅವರು ಕೂಗಿದ ನಂತರ ನಾನು ಎದ್ದು ನನ್ನ ಹೆಂಡತಿಯನ್ನು ಎಬ್ಬಿಸದೇ ಮುಖ ತೊಳೆದು, ಗಾಡಿ ತೆಗೆದು ಗೇಟಿಗೆ ಕೀಲಿ ಹಾಕುತ್ತಿದ್ದೆ. ಆಗ ನನ್ನ ಹೆಂಡತಿ ಕೂಗಿದಳು. “ಜಾಕೆಟ್ ತೊಗೊಂಡು ಹೋಗ್ರೀ. ಸೀಎಮ್ಮ ಮನಿ ಹತ್ತಿರ ಭಾಳ ಥಂಡಿ ಐತೆಂತ. ಮತ್ತೆ ಒಳಗೆ ಹೋಗಿ ಜಾಕೆಟ್ ಹೊದ್ದು ಹೊರಟೆ. ನಾನು ಮಾಡುವುದು ಎಲ್ಲ ಇವಳಿಗೆ ಹೇಗೆ ಗೊತ್ತಾಗುತ್ತದೆ? ಬಹುಶಃ ನನಗೆ ರೇಡಿಯೋ ಕಾಲರ್ ಹಾಕಿರಬೇಕು, ಅಂದುಕೊಂಡೆ. ಅಲ್ಲಿ ಹೋದರೆ ಸೀಎಮ್ಮ ಅವರ ಮನೆಯಲ್ಲಿ ಸೀಎಮ್ಮೇ ಇಲ್ಲ. ಸೀಎಮ್ ಮನೆಯಲ್ಲಿ ಆಗಲೇ ಪೋಲಿಸ್ ಕಮಿಷನರ್ ಅವರು, ಚೀಫ್ ಸೆಕ್ರೆಟರಿ, ಕಂಟೋನಮೆಂಟಿನ ನೀಲಿ ಕಾರಿನಿಂದ ಇಳಿದ ನೀಲಿ ಸಮವಸ್ತ್ರ ಧರಿಸಿ ನೀಲಿ ಪೇಟಾ ಸುತ್ತಿದ್ದ ಸರದಾರಜಿ ಆರ್ಮಿಯವರು, ಆ ಸಾಹೇಬರು, ಈ ಸಾಹೇಬರು, ಎಲ್ಲರೂ ನೆರೆದಿದ್ದರು. ಅಷ

A Polio case suspected in Bidar in Karnataka

A 13 -month old child in Walsang village in Bhalki taluk has been diagnosed with Acute Flaccid Paralysis. Doctors suspect that one of the causes of the condition may be Polio. On December 29, Gouse Khan, a farmer from Walsang took his 13 months old son Sharbaz Khan to the primary health centre at Beeri (B) village complaining that he was unable to move his legs `like other children of his age’. The paediatrician in the hospital suspected nerve injury and referred him to the taluk hospital. Medical tests were done in Bhalki and Bidar and doctors decided that it was a case of acute flaccid paralysis. Stool samples have been sent to hi-tech laboratories in Bangalore and Mumbai. The child has been sent to Hyderabad for motor neuron testing on Friday. A senior doctor has accompanied the child to Hyderabad. ``Records show the child had received all the immunization doses due for his age. However, there are several ways in which infections can spread. The child might have been exposed to infe